ಯಾತ್ರೆಯ ನಡುವೆ

ಮರೆಯಲ್ಲಿ ನಿಂತು
ಮಣಿದಿಗಂತಗಳನ್ನು ಬರೆಯುವ
ಸತ್ಯದ ತರಣಿಯೇ,
ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ.
ಈ ಮೊಗ್ಗು ಅರಳಿದ್ದು,
ಹಂಬಲಕ್ಕೆ ಹೊರಳಿದ್ದು,
ಮೆಚ್ಚಿದ ದುಂಬಿಯ ಹುಚ್ಚಿಗೆ
ಕಾಯಿಬಿಟ್ಟು ಫಲಿಸಿದ್ದು
ನಿನ್ನರಸಿ ಅಭಿನಯಿಸಿದ ಮಧುನೃತ್ಯದ ಒಂದೊಂದು ಹೆಜ್ಜೆ
ಏನೇನನ್ನೋ ಒಲಿದು
ನಿನ್ನನ್ನಷ್ಟೇ ಮರೆತದ್ದೂ
ಕಸಕಡ್ಡಿಗಳನ್ನೆಲ್ಲ ನುಡಿದು
ಪತಿಯ ಹೆಸರನ್ನೆ ಹೇಳಲು ಒಲ್ಲದ
ಸತಿಯ ಲಜ್ಜೆ

ನೋಡು
ನಿನ್ನ ನೆನಪಾದೊಡನೆ ಇಲ್ಲಿ
ಹೊನ್ನ ಬೆಳಕು ಹುಟ್ಟಿದೆ,
ಮಣ್ಣಿನ ಮರೆಯಲ್ಲಿ ಸಣ್ಣಗೆ
ಮಲ್ಲಿಗೆ ಪರಿಮಳ ಎದ್ದಿದೆ,
ಅಲೆಗಳ ಕಿರಿಕಿರಿ ಹರಿದು
ಕೆಳಕಡಲಿನ ಅಖಂಡತೆ ತೆರೆದಿದೆ;
ಜಾತ್ರೆಗೆ ಹೊರಟ ಜೀವಕ್ಕೆ ಉಳಿದ
ಯಾತ್ರೆಯ ನೆನಪಾಗಿ,
(ಬದಲಾಗದ ಹೊನ್ನು ಹೆಣ್ಣು ಮಣ್ಣು)
ನಿನ್ನೊಂದಿಗೆ
ಪಡಲಾಗದ ಸುಖದ ಹಂಬಲದಲ್ಲಿ
ಸುಡುತ್ತಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೨೦
Next post ಯೋಗ್ಯ ಪರಿಶೀಲನೆ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys